ಎಐಸಿಸಿಗೆ ಮಲ್ಲಿಕಾರ್ಜುನ ಖರ್ಗೆ ಅಜಾತ ಶತ್ರು ಆಗಮನ

🖋ವೈ.ಜಿ.ಅಶೋಕ್ ಕುಮಾರ್ ಹಿರಿಯ ರಾಜಕೀಯ ವಿಶ್ಲೇಷಕರು ಅಜಾತಶತ್ರು ಆಗಮನ *** *** *** *** ರಾಜ್ಯ ಕಾಂಗ್ರೆಸ್ನಲ್ಲಿ ಮೂರು ಶಕ್ತಿ ಕೇಂದ್ರ ************ ಆವತ್ತು 2004ರಲ್ಲಿ ಇನ್ನೇನು ದೇವೇಗೌಡರು ಮುಖ್ಯಮಂತ್ರಿ ಹೆಸರನ್ನು ಸೋನಿಯಾ ಗಾಂಧಿಯವರಿಗೆ..

Share :

🖋ವೈ.ಜಿ.ಅಶೋಕ್ ಕುಮಾರ್
ಹಿರಿಯ ರಾಜಕೀಯ ವಿಶ್ಲೇಷಕರು

ಅಜಾತಶತ್ರು ಆಗಮನ
*** *** *** ***
ರಾಜ್ಯ ಕಾಂಗ್ರೆಸ್ನಲ್ಲಿ ಮೂರು ಶಕ್ತಿ ಕೇಂದ್ರ
************
ಆವತ್ತು 2004ರಲ್ಲಿ ಇನ್ನೇನು ದೇವೇಗೌಡರು ಮುಖ್ಯಮಂತ್ರಿ ಹೆಸರನ್ನು ಸೋನಿಯಾ ಗಾಂಧಿಯವರಿಗೆ ಸೂಚಿಸಬೇಕಿತ್ತು.
ಅವರಿಗೊಂದು ದೂರವಾಣಿ
ಕರೆ ಬಂತು.
ಮಾತನಾಡಿದವರು‍ ಕಾಂಗ್ರೆಸ್ ಮುಖಂಡರೇ ಆಗಿದ್ದರು.
ಖರ್ಗೆಯವರ ಬದಲು ಅವರ ಅನುಗಾಲದ ಗೆಳೆಯ ಧರ್ಮಸಿಂಗ್ ಮುಖ್ಯಮಂತ್ರಿಯಾದರು.
ಸಂತೋಷದಿಂದ ಗೆಳೆಯನನ್ನು ಖರ್ಗೆ ಆಲಂಗಿಸಿಕೊಂಡು ಬುದ್ಧನಾದರು.

ಅದಕ್ಕೂ ಮುನ್ನ ಎಸ್ ಎಂ ಕೃಷ್ಣ ಕ್ಯಾಬಿನೆಟ್ ನಲ್ಲಿ ಉಪಮುಖ್ಯಮಂತ್ರಿ ಘೋಷಣೆಯಾಗಿ ಒಟ್ಟೊಟ್ಟಿಗೆ ಪ್ರಮಾಣ ಸ್ವೀಕರಿಸಬೇಕಿತ್ತು. ಆಗ
ಸ್ವಯಂ ಕೆ ಎಚ್ ರಂಗನಾಥ್ ಕೃಷ್ಣ ಮನೆಗೆ ಧಾವಿಸಿ ಬಂದು ಕೃಷ್ಣ ಅವರ ಕೈ ಹಿಡಿದು ಪ್ರಮಾಣ ಮಾಡಿಸಿ ಕೊಂಡರು. ಕೃಷ್ಣ ವಿಧಾನಸೌಧದ ಕಾರಿಡಾರಿನಲ್ಲಿ ಖರ್ಗೆ ಮನವೊಲಿಸಿದರು. ಈ ರಾಜ್ಯದಲ್ಲಿ ಯಾರಿಗಾಗಿ ಉಪಮುಖ್ಯಮಂತ್ರಿ ಹುದ್ದೆ ಮೊದಲ ಬಾರಿಗೆ ಸೃಷ್ಟಿಯಾಗಿತ್ತೋ ಅವರು
ಮುಖ್ಯಮಂತ್ರಿ ಆದಾಗ ಖರ್ಗೆಯವರಿಗೆ ಆ ಸ್ಥಾನ ನೀಡಲಿಲ್ಲ..
ಖರ್ಗೆ ಮತ್ತೊಮ್ಮೆ ಬುದ್ದನಾದರು.

ಸಿದ್ದರಾಮಯ್ಯ ಅವರಿಗಾಗಿ ವಿರೋಧ ಪಕ್ಷದ ಸ್ಥಾನ ತ್ಯಜಿಸಬೇಕಾಯಿತು. ಖರ್ಗೆ ಕೆಪಿಸಿಸಿ ಅಧ್ಯಕ್ಷರಾದರು. ಮುಂದೆ ಲೋಕಸಭೆ ಗೆದ್ದರೂ ವಿರೋಧ ಪಕ್ಷದ ನಾಯಕನಾಗಲು ಸಂಖ್ಯಾಬಲದ ಕೊರತೆಯಿಂದ ಸಂಸದೀಯ ಮುಖಂಡರಾದರು.
ಆಗ ಪ್ರಬಲ ಪ್ರಧಾನಿಯನ್ನು ಎದುರಿಸಿ ನಿಂತರು.
ಅವಮಾನಿತ ಸಂದರ್ಭಗಳು ಅವರಿಗಾಗಿಯೆ ಸೃಷ್ಟಿಯಾಗುತ್ತಿತ್ತು !
ಖರ್ಗೆ ಕಂಠದ ವಾಗ್ಜರಿಗೆ ಮೋದಿ ಬೆರಗಾದರು.
ಅವರ ಕಂಠವನ್ನು ಕರ್ನಾಟಕದ ಕಂದಮ್ಮಗಳು ಕೂಡಾ ಗುರುತಿಸುತ್ತವೆ.

ಮುಖ್ಯಮಂತ್ರಿ ಕುರ್ಚಿಯ ಸಮೀಪವೇ ಇದ್ದ ಖರ್ಗೆ ಮತ್ತು ಸಿದ್ದರಾಮಯ್ಯ ನಡುವೆ ಆಂತರಿಕ ಚುನಾವಣೆ ನಡೆದರೂ ಖರ್ಗೆಗೆ ಮುಖ್ಯಮಂತ್ರಿ ಸ್ಥಾನ ದಕ್ಕಲಿಲ್ಲ.
ಅವರು ಮತ್ತೊಮ್ಮೆ ಬುದ್ದನಾದರು.

ಕರ್ನಾಟಕದಲ್ಲಿ ಮೂವರು ಮುಖ್ಯಮಂತ್ರಿಗಳ ಬದಲಾವಣೆ ಆದಾಗಲೂ ಖರ್ಗೆ ಧರ್ಮಸಿಂಗ್ ಹೆಚ್ ಕೆ ಪಾಟೀಲ್ ಮಂತ್ರಿಗಳು ಇವರನ್ನು ಕರ್ನಾಟಕ ರಾಜಕಾರಣದ‌ ಸೆಟ್ ದೋಸೆ ಎಂದು ಪತ್ರಿಕೆಗಳು ಹೆಸರಿಸಿದವು. ಅವರನ್ನು ಸೋಲಿಲ್ಲದ ಸರದಾರ ಎಂದೇ ಬಣ್ಣಿಸಲಾಗಿದೆ.

ಈಗ ಮತ್ತೆ ಅವರು ಪರಮೋಚ್ಛ ಸ್ಥಾನವನ್ನು ಅಲಂಕರಿಸಿದ್ದಾರೆ.
ಸಿದ್ದು ಡಿಕೆಶಿ ಹಗ್ಗ ಜಗ್ಗಾಟದಲ್ಲಿ ಖರ್ಗೆ ಮುಖ್ಯಮಂತ್ರಿ ಆಗಬಹುದೆಂದು ಭಾವಿಸಲಾಗಿತ್ತು. ಈಗ ಆ ಅವಕಾಶವೂ ಕ್ಷೀಣಿಸಿದೆ. ಆದರೆ ರಾಜ್ಯದಲ್ಲಿ ಖರ್ಗೆ ಶಕ್ತಿ ಕೇಂದ್ರ ವಿಸ್ತಾರವಾಗಲಿದೆ. ಸಿದ್ದು ಡಿಕೆಶಿ ಮನೆ ಬಾಗಿಲಿಗೆ ಎಡತಾಕುತ್ತಿದ್ದ ಆಕಾಂಕ್ಷಿಗಳು ಇನ್ನು ಮುಂದೆ ಖರ್ಗೆ ಮನೆ ಬಾಗಿಲು ಕಾಯಲಿದ್ದಾರೆ.
ಆದರೆ ಮುಂದಿನ ಲೋಕಸಭೆಗೆ ಅವರು ಆಯ್ಕೆಯಾಗ ಬೇಕಿದೆ . ಅದಕ್ಕೂ ಮೊದಲು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಅದರಲ್ಲಿ ಅವರು ವಿಫಲರಾದರೆ ಎಐಸಿಸಿ ಅಧ್ಯಕ್ಷ ಸ್ಥಾನದ ಗೌರವ ಕುಸಿಯಲಿದೆ.
ಮುಂದೊಂದು ದಿನ ಲೋಕಸಭೆಗೆ ಬಹುಮತ ದೊರೆತರೆ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ.
ಅದಾಗದಿದ್ದರೇ ಅವರು ಮತ್ತೊಮ್ಮೆ ಬುದ್ದನಾಗುತ್ತಾರೆ.

ಕಾಂಗ್ರೆಸ್ ನ ಸ್ವಾರ್ಥಿಗಳ ನಡುವೆ ತಮ್ಮ ಅನುಭವಗಳ ನಡವಳಿಕೆಯಿಂದ ಅನಾಥರಾಗಿ ಜನಿಸಿದ ಮಲ್ಲಿಕಾರ್ಜುನ
ಎಂ ಖರ್ಗೆ ಆಕಾಶದೆತ್ತರಕ್ಕೆ ಬೆಳೆದದ್ದು ತಮ್ಮ ಪಕ್ಷನಿಷ್ಟ ಪ್ರವೃತ್ತಿಯಿಂದ.
ಅವರು ಯಾವತ್ತೂ ಹೈಕಮಾಂಡ್ ಹಾಕಿದ ಗೆರೆ ದಾಟಿದವರಲ್ಲ.ಅದಕ್ಕಿಂತ ಹೆಚ್ಚಾಗಿ ಗೆರೆ ಹಾಕಲು ಅವರು ಅವಕಾಶವನ್ನೇ ಕೊಡಲಿಲ್ಲ.
ದೇವರಾಜ ಅರಸರು ಸಿಡಿದಾಗಲೂ ಖರ್ಗೆ ಹೈಕಮಾಂಡ್ ಪರವಾಗಿಯೇ ನಿಂತರು.
ಎರಡೂ ಮಂಡಿ ಅಪರೇಷನ್ ಮಾಡಿಕೊಂಡು ಎದ್ದು ನಿಂತಿರುವ
ಅವರು ತಿನ್ನುವ ಅಂಬಳಗಟ್ಟ ಬೀಜ ಕಂಠಕ್ಕೆ ಮತ್ತು ಸೊಂಟಕ್ಕೆ ಬಲ ತುಂಬಿದೆ ಎಂದು ಹಿರಿಯ ಪತ್ರಕರ್ತ ಕೆ ರಾಜಾರಾವ್ ಹೇಳಿದ್ದು ಈಗ ನೆನಪಾಗುತ್ತಿದೆ.
— — —- —- —

Share :

About the Author

Leave a Reply

Your email address will not be published. Required fields are marked *

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports