ಹಯಗ್ರೀವ ಚಿತ್ರವಿಮರ್ಶೆ

ರೇಟಿಂಗ್ : 3.5/5 ನಿರ್ಮಾಣ : ಪದ್ಮ ಸಮೃದ್ಧಿ ಮಂಜುನಾಥ್ ನಿರ್ದೇಶನ : ರಘುಕುಮಾರ್ ಓ.ಆರ್ ವಿಕ್ಷಿಪ್ತ ಕಲ್ಪನೆ; ವಿನಾಶದ ನಮೂನೆ ಮನುಷ್ಯನ ತಲೆ ಕತ್ತರಿಸಿ ಅದಕ್ಕೆ ಪ್ರಾಣಿಗಳ ತಲೆಯನ್ನು ಕಸಿ ಮಾಡಿ ಹೊಂದಿಸುವ..

Share :

ರೇಟಿಂಗ್ : 3.5/5

ನಿರ್ಮಾಣ : ಪದ್ಮ ಸಮೃದ್ಧಿ ಮಂಜುನಾಥ್

ನಿರ್ದೇಶನ : ರಘುಕುಮಾರ್ ಓ.ಆರ್

ವಿಕ್ಷಿಪ್ತ ಕಲ್ಪನೆ; ವಿನಾಶದ ನಮೂನೆ

ಮನುಷ್ಯನ ತಲೆ ಕತ್ತರಿಸಿ ಅದಕ್ಕೆ ಪ್ರಾಣಿಗಳ ತಲೆಯನ್ನು ಕಸಿ ಮಾಡಿ ಹೊಂದಿಸುವ ವಿಕ್ಷಿಪ್ತ ಕಲ್ಪನೆಯಲ್ಲಿ ತೇಲಾಡುವ (ಸೀತಿಯಲ್ ಕಿಲ್ಲರ್) ವೈದ್ಯಕೀಯ ವಿದ್ಯಾರ್ಥಿಯ ಹುಚ್ಚಾಟಗಳನ್ನು ಹತ್ತಿಕ್ಕಲು ಇರುವ ಅವತಾರ ಪುರುಷನೇ ಅರ್ಜುನ್ (ಹಯಗ್ರೀವ)..

ಕಸದ ರಾಶಿಯ ನಡುವೆ ಹಂದಿ ತಲೆ ಇರುವ ಮೃತ ದೇಹವೊಂದು ಸಿಗುತ್ತದೆ. ಬಳಿಕ ಕುದುರೆ, ಎಮ್ಮೆ ತಲೆ ಮತ್ತೆ ಗಣೇಶನಂತೆ ಆನೆ ತಲೆ ಇರುವ ಮೃತ ದೇಹಗಳು ಪತ್ತೆಯಾಗುತ್ತವೆ..

ಪೊಲೀಸ್ ಇಲಾಖೆಗೆ ಸವಾಲಾಗುವ ಈ ಪ್ರಕರಣವನ್ನು ಇನ್ನೂ ಸಬ್ ಇನ್ಸ್ ಪೆಕ್ಟರ್ ಆಗಿರುವ ಅರ್ಜುನ್ ಭೇದಿಸಲು ಹೊರಡುವುದು ಮತ್ತು ಆ ಸವಾಲು ಕ್ಷಣ ಕ್ಷಣಕ್ಕೂ ಉದ್ವೇಗಗೊಳಿಸುವುದು ಮತ್ತು ಅದೇ ಕಾರಣಕ್ಕೆ ಕುತೂಹಲ ಹೆಚ್ಚಿಸುವುದು ಚಿತ್ರದ ಮುಖ್ಯಾಂಶ.

ಆದರೆ ಇದರ ಸೂತ್ರಧಾರ ಒಬ್ಬ ವಿಕೃತ ಮನಸ್ಥಿತಿ ಇರುವ ವೈದ್ಯಕೀಯ ವಿದ್ಯಾರ್ಥಿ ಮತ್ತು ಹ್ಯಾಕಿಂಗ್ ಪರಿಣಿತ. ಹಾಗಾಗಿ ಆತನ ಜಾಡನ್ನು ಹಿಡಿಯುವುದು ಸುಲಭವಲ್ಲ; ಹಾಗಾಗಿ ಇಲ್ಲಿ ಪೊಲೀಸ್ ವ್ಯವಸ್ಥೆ ಮತ್ತು ಅರ್ಜನ್ ನ ಬ್ರೇನ್ ಹೆಚ್ಚು ಕೆಲಸ ಮಾಡುತ್ತದೆ.

ಓದುವ ಕಾಲದಲ್ಲಿಯೇ ಹೃದಯದ ಕಸಿ ಮಾದರಿಯಲ್ಲಿ ತಲೆ ಮತ್ತು ದೇಹ ಹೊಂದಿಸುವ ಕಸಿ ಏಕೆ ಮಾಡಬಾರದು ಎಂದು ಪ್ರಶ್ನಿಸುವ ಖಳನಿಗೆ ಭಾರತೀಯ ಪುರಾಣದಲ್ಲಿ ವಿಷ್ಣುವಿನ ನರಸಿಂಹ, ವರಾಹ, ಹಯಗ್ರೀವ ಹಾಗೂ ಗಣೇಶನ ಬೇರೆ ತಲೆಯ ಅವತಾರಗಳು ಕೆಣಕುತ್ತವೆ. ಅದೇ ರೀತಿ ಪ್ರಯೋಗಗಳನ್ನು ಮಾಡಲು ಆತ ಹಿಡಿಯುವ ವಾಮ ಮಾರ್ಗದಿಂದ ಯಥೇಚ್ಛ ಕೊಲೆಗಳು ನಡೆಯುತ್ತವೆ.

ಪೊಲೀಸ್ ಅಧಿಕಾರಿ ಅರ್ಜುನ್ ಸಾಮಾನ್ಯನಲ್ಲ; ಆತನಿಗೆ ಅಶ್ವಿನ್ ಎಂಬ ಸಹಾಯಕ ಅಧಿಕಾರಿ ಬೆಂಬಲವೂ ಇರುತ್ತದೆ. ಹಾಗಾಗಿ ಪೊಲೀಸ್ ವ್ಯವಸ್ಥೆಯ ಸಮರ್ಪಕ ಬಳಕೆಯಿಂದ ಎಲ್ಲವನ್ನು ಬೇಧಿಸುತ್ತಾನೆ. ಮುಖ್ಯವಾಗಿ ಆ ವಿಕೃತ ಮನುಷ್ಯ ಅರ್ಜುನ್ ಕುಟುಂಬದ ವಿಷಯಕ್ಕೆ ಕೈ ಹಾಕಿ ಅವಸಾನವನ್ನು ಮೇಲೆಳೆದುಕೊಳ್ಳುತ್ತಾನೆ.

ಇಲ್ಲಿ ಅಚ್ಚರಿ ಕಾಡುವುದು ಕೆಳ ಹಂತದ ಅಧಿಕಾರಿ ದೊಡ್ಡದಾಗಿ ಕೆಲಸ ಮಾಡುವುದು. ಆ ಅಧಿಕಾರಿಗೆ ಇನ್ನೂ ಹೆಚ್ಚಿನ ಪವರ್ ಬೇಕಿರುತ್ತದೆ ಎಂಬುದು ಪ್ರೇಕ್ಷಕನಿಗೇ ಅನಿಸುತ್ತ ಹೋಗುತ್ತದೆ. ಆದೇಶ ನೀಡುವಷ್ಟು ಅಧಿಕಾರವಿಲ್ಲದ ಅಧಿಕಾರಿ ಕೈಗೆ ದೊಡ್ಡ ಜವಾಬ್ದಾರಿ ವಹಿಸುವ ಕಮಿಷನರ್ ಕೂಡ ಇಲ್ಲಿ ಗಮನ ಸೆಳೆಯುತ್ತಾರೆ.

ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸು ಕಥೆಯ ವೇಗಕ್ಕೆ ಬೆಂಬಲವಾಗಿ ನಿಲ್ಲುವುದು ಜ್ಯೂಡೋಸ್ಯಾಂಡಿ ಅವರ ಹಿನ್ನೆಲೆ ಸಂಗೀತ ಮತ್ತು ಗಿರೀಶ್ ಆರ್.ಗೌಡ ಛಾಯಾಗ್ರಹಣ. ಕೆ.ಎಂ.ಪ್ರಕಾಶ್ ಸಂಕಲನವೂ ವೇಗಕ್ಕೆ ಸಹಕರಿಸಿದೆ.

ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಧನ್ವೀರ್ ಗೌಡ ಲೀಲಾಜಾಲವಾಗಿ ನಟಿಸಿದ್ದಾರೆ. ‘ಐ ಯಾಮ್ ದಿ ಸೂಪರ್ ಬ್ರಹ್ಮ’ ಎಂದು ಅಬ್ಬರಿಸುವ ಸುನೀಲ್ ರಾವ್ ವರಸೆ ಆ ಪಾತ್ರಕ್ಕೆ ಅದ್ಭುತ.

ಆದರೆ ಅಷ್ಟೊಂದು ರಕ್ತಪಾತ, ಹಿಂಸೆ ನೋಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎಂಬುದು ಚಿತ್ರದ ನಕಾರಾತ್ಮಕ ಅಂಶ.

ಸಂಜನಾ ಆನಂದ್, ಅಶ್ವಿನ್ ಹಾಸನ ಹಾಗೂ ಅಶ್ವಿನಿಗೌಡ ಅವರು ತಮಗೆ ದಕ್ಕಿರುವ ವಿಶೇಷ ಅವಕಾಶಗಳಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ ರಮೇಶ್ ಭಟ್, ಸಾಧುಕೋಕಿಲ, ಶರತ್ ಲೋಹಿತಾಶ್ವ , ಶೊಭ್ ರಾಜ್, ಗಿಲ್ಲಿ ನಟ ಅವರ ಪಾತ್ರಗಳು ಚಿತ್ರಕ್ಕೆ ಪೂರಕವಾಗಿವೆ.

Share :

About the Author

Leave a Reply

Your email address will not be published. Required fields are marked *

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports