Category: ರಾಜಕೀಯ-ವಿಶ್ಲೇಷಣೆ
-

ಮೌಲ್ಯಧಾರಿತ ರಾಜಕಾರಣ ನೆನಪಾದ ರಾಮಕೃಷ್ಣ ಹೆಗಡೆ
ಕರ್ನಾಟಕ ಕಂಡ ಮೊದಲ ಕಾಂಗ್ರೇಸ್ಸೇತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ (29 ಆಗಸ್ಟ್ 1929) ನಯ ನಾಜೂಕುತನದ ಚಾಣಾಕ್ಷ ನಡೆಯ ಲೆಕ್ಕಾಚಾರದ ರಾಜಕಾರಣಿ. ಆರು ಸಲ ವಿಧಾನಸಭೆ ಎರಡು ಸಲ ರಾಜ್ಯಸಭೆಗೆ ಆಯ್ಕೆಯಾಗಿ 1983 ರಿಂದ 1988 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾದವರು. ಹಾಗೆಯೇ ರಾಷ್ಟ್ರ ರಾಜಕಾರಣದ ಎಲ್ಲಾ ಪಟ್ಟುಗಳನ್ನು ಅರಿತ ಕಟ್ಟಾಳು ಆಗಿದ್ದರೂ ಪ್ರಧಾನಿ ಹುದ್ದೆ ಕೈ ಗೂಡಲಿಲ್ಲ ವ್ಯಸನದಲ್ಲೇ ಕೊರಗಿದವರು. ದೇವರಾಜ ಅರಸರ ನಂತರ ಆಡಳಿತ ಮಾದರಿಯ ಹೊಸ ಮಜಲನ್ನು ಪರಿಚಯಿಸಿದ ಹೆಗಡೆ…
-

ಸ್ನೇಹಪ್ರಿಯಗೆ ಒಂದು ವರ್ಷ
ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾ ಅಲ್ಲಿಂದ ಹೊರ ಬೀಳುವುದು ಹೊಸದೇನು ಅಲ್ಲ; ಅದರಲ್ಲಿಯೂ ತಬ್ಬಲಿತನ ಜೊತೆಗೆ ಕಟ್ಟಿಕೊಂಡ ನನ್ನಂಥವರಿಗೆ ತೀರಾ ಸಾಮಾನ್ಯವಾದ ವಿಷಯ. ಅದರಲ್ಲಿಯೂ ಮುಖ್ಯ ವಾಹಿನಿ ಪತ್ರಿಕೋದ್ಯಮ ಬಿಟ್ಟು ಆಚೆ ಇರುವುದೆಂದರೆ ಅದು ನೀರಿನಿಂದ ಮೀನನ್ನು ಎತ್ತಿ ಹೊರ ಹಾಕಿದಂತೆ. ಆದರೆ ಈ ಬಾರಿ ಎಲ್ಲವೂ ಗಂಭೀರದ ವಿಷಯವಾಗಿತ್ತು. ಪತ್ರಿಕೆಗಳಿಂದ ಹೊರಬಿದ್ದವರ ಸಂಖ್ಯೆಯೂ ಹೆಚ್ಚಾಗಿ ನನ್ಬೊಬ್ಬನಿಗೇ ಈ ರೀತಿ ಆಗಿಲ್ಲವಲ್ಲ ಎಂಬ ತಾತ್ಕಾಲಿಕ ಸಮಾಧಾನವೂ ಇತ್ತು. ಇದೇ ವೇಳೆ ಗೆಳೆಯರೊಬ್ಬರು ಈಗ ಮುಖ್ಯ ವಾಹಿನಿಯೇ ಸಾಮಾಜಿಕ ಜಾಲ…
-

ಪತ್ರಕರ್ತರ ಸಾಕ್ಷಿ ಪ್ರಜ್ಞೆ ಸಾಚ ಇನ್ನು ನೆನಪು ಮಾತ್ರ.
ಸಾ.ಚಗೆ ಶ್ರದ್ಧಾಂಜಲಿ —— —— ——- ನಮ್ಮಿಬ್ಬರ ಫೋನು ಅವೇಳೆಯಲ್ಲಿ ರಿಂಗಣಿಸಿದರೆ ಪರಸ್ಪರ ಮಾತಾಡಿಕೊಂಡು ಏನು? ಯಾರು ? ಎಲ್ಲಿ ? ಎಡ್ರಾ ವಂಡಿ….. ನೂರಾರು ಸಾವು -ಬದುಕು ಗಳನ್ನು ಕಟ್ಟಿ ಕೊಟ್ಟವರು ಸಾಚ. ಬದುಕನ್ನು ಕಟ್ಟಿಕೊಡುವುದೇನೊ ಸರಿ,ಸಾವನ್ನು ಕಟ್ಟಿ ಕೊಡುವುದಾದರೂ ಹೇಗೆ ಅದೇ ಸಾಚ ಸ್ಪೆಷಲ್ ಸತ್ತವರು ಸತ್ತರು ಇರೋರು ಬದುಕಬೇಕಲ್ಲವೇ! ಇದು ಸಾಚ ಉವಾಚ ಹುಟ್ಟುವ ಮಕ್ಕಳಿಗೆ ಸ್ಕೂಲ್ ಪ್ರವೇಶದಿಂದ ಮೊದಲ್ಗೊಂಡು ಸಾಯಲು ಆಸ್ಪತ್ರೆ ಸೇರಿದವರೆಗೆ ಸಾಚ ಬೇಕೇ ಬೇಕು. ಒಂದು ಸುದ್ದಿಗೆ ಆ…
-

ಗೌಡರಿಗೆ ವರುಷ ಕುಮಾರಣ್ಣಂಗೆ ನಿಮಿಷ
‘ಹೇಳ್ತೀನಿ ಇರು ಗುರು ‘ ದೇವೇಗೌಡರು ಇನ್ನೂ ಉತ್ತರ ಹೇಳಿಲ್ಲ ಮೂವತ್ತು ವರ್ಷಗಳ ಹಿಂದೆ ಕೇಳಿದ ಪ್ರಶ್ನೆಯೇ ಮರೆತು ಹೋಗಿದೆ. ಗೌಡರು ಕೆಲವು ಪ್ರಶ್ನೆಗಳು ಎದ್ದಾಗ, ಉತ್ತರಿಸಲೇಬೇಕಾದ ಸಂದರ್ಭಗಳು ಸೃಷ್ಟಿಯಾದಾಗ ಮೌನಕ್ಕೆ ಶರಣಾಗಿ ಬಿಡುತ್ತಾರೆ. ಕುಮಾರಸ್ವಾಮಿಯವರು ಸುಖಾ ಸುಮ್ಮನೆ ಮೈಮೇಲೆ ಎಳೆದುಕೊಳ್ತಾರೆ ಅದೇ ವೆತ್ಯಾಸ! ಬೆಳ್ಳಂಬೆಳಗ್ಗೆ ವೈ ಎಸ್ ವಿ ದತ್ತ ಅವರೊಂದಿಗೆ ಫೋನ್ ನಲ್ಲಿ ಚರ್ಚಿಸುವಾಗ ಈ ವಿಚಾರಗಳು ಹಾದು ಹೋದವು. ಜೆಡಿಎಸ್ ನಲ್ಲಿ ಒಬ್ಬರು ಅಧ್ಯಕ್ಷರಿದ್ದಾರೆ ಎನ್ನುವುದನ್ನೆ ಮರೆತುಬಿಡುತ್ತಾರೆ. ವಾಚಾಳಿ ವಿಶ್ವನಾಥ್ ಅಧ್ಯಕ್ಷರಾಗಿದ್ದಾಗಲೂ ಈ…
-

ಗೌಡರ ದತ್ತು ಪುತ್ರ ದತ್ತ – ದತ್ತ @ 65
ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಅವರಿಗೂ ನನಗೂ ಸುಮಾರು ಹತ್ತು ವರ್ಷಗಳ ಅಂತರ ಆದರೆ ನಮ್ಮ ಸ್ನೇಹದ ಸಂಪರ್ಕ ನಿರಂತರ. ಇಂದಿರಾಗಾಂಧಿ ತಂದ ಎಮರ್ಜೆನ್ಸಿಯಲ್ಲಿ ಜನಿಸಿದ ಹಲವಾರು ವಿರೋಧ ಪಕ್ಷಗಳ ಹಾಗೂ ವಿಧ್ಯಾರ್ಥಿ ನಾಯಕರುಗಳಲ್ಲಿ ದತ್ತ ಕೂಡ ಒಬ್ಬರು. ಮಾಜಿ ಪ್ರಧಾನಿ ದೇವೇಗೌಡರಿಗೆ ಹಲವಾರು ಮಾನಸ ಪುತ್ರರು ,ಪಿಜಿಆರ್ ಸಿಂಧ್ಯಾ,ಸಿದ್ದರಾಮಯ್ಯ,ಬಿಎಲ್ ಶಂಕರ್, ಉಗ್ರಪ್ಪ ಮುಂತಾದವರು ಆದರೆ ಬದುಕಿನುದ್ದಕ್ಕೂ ಗರುಡುಗಂಬದಂತೆ ನಿಂತವರು ವೈ ಎಸ್ ವಿ ದತ್ತ. ಕಡೂರಿನ ಯಗಟಿ ಗ್ರಾಮದಿಂದ ಬೆಂಗಳೂರು ನ್ಯಾಷನಲ್ ಕಾಲೇಜು ವಿದ್ಯಾರ್ಥಿಯಾಗಿ ,ಹೆಚ್…
-

ಸಾ.ರಾ.ಮಹೇಶ್ ಸಾದ ಸೀದ ಸಾಹಸಗಳು
ಹ್ಯಾಟ್ರಿಕ್ ಹೀರೋ ಸಾಲಿಗ್ರಾಮ ರಾಮೇಗೌಡ್ರು ಮಹೇಶ (8.10.1966)… ಕಳೆದ ವಿಧಾನಸಭಾ ಚುನಾವಣೆಯಿಂದಲೂ ನಿರಂತರವಾಗಿ ಸುದ್ದಿಯಲ್ಲಿ ಇರುವಂತೆ ಸನ್ನಿವೇಶಗಳು ಸೃಷ್ಟಿಯಾಗಿವೆ ಅಥವಾ ಸ್ವಯಂ ಸೃಷ್ಟಿಸಿಕೊಂಡಿದ್ದಾರೆ. ಈಗ ಅದು ಸ್ಫೋಟಿಸಿ ತನಿಖೆಗೆ ತಲೆಕೊಡುವ ಹಂತಕ್ಕೆ ಬಂದು ತಲುಪಿದೆ. ರೋಹಿಣಿ ಸಿಂಧೂರಿಯವರು ಎತ್ತಿರುವ ಪ್ರಶ್ನೆಗಳು ಕಳೆದ ಹತ್ತು ವರ್ಷಗಳ ಹಿಂದೆ ಇವರು ಏನಾಗಿದ್ದರು ? ಈಗ ಏನಾಗಿದ್ದಾರೆ ಯಾವ ಇಂಡಸ್ಟ್ರಿಗಳನ್ನು ರೂಪಿಸಿ ಎಷ್ಟು ಉದ್ಯೋಗಗಳನ್ನು ನೀಡಿದ್ದಾರೆ? ಗಾಜಿನ ಮನೆಯಲ್ಲಿ ನಿಂತು ಕಲ್ಲೆಸೆಯುತ್ತಿದ್ದ ಮಹೇಶ್ ಮಿರ್ಲೆ- ಸಾಲಿಗ್ರಾಮದ ಓರ್ವ ಮೇಸ್ಟ್ರುಮಗ, ಎರಡು ಎಕರೆ…
-

ಮಾಸ್ಕ್ ಹೊಸತ್ತಲ್ಲ.. ದಂಡವೂ ಹೊಸದಲ್ಲ..
ಬಿಬಿಎಂಪಿ ಮಾರ್ಷಲ್ ಗಳು ದಂಡ ಹಾಕುವುದು ಹೊಸದೇನೂ ಅಲ್ಲ; ಲಾಕ್ ಡೌನ್ ಸಡಿಲಗೊಂಡ ನಂತರ ದಂಡ ಹಾಕುವ ಪ್ರಕ್ರಿಯೆ ನಿರಂತರವಾಗಿದೆ. ಏನಪ್ಪಾ ವ್ಯತ್ಯಾಸ ಎಂದರೆ ಆಗ ದಂಡದ ಮೊತ್ತ 200₹ ಇತ್ತು. ಅದನ್ನು ಏಕಾಏಕಿ ಒಂದು ಸಾವಿರಕ್ಕೆ ಏಕೆ ಹೇರಿಕೆ ಮಾಡಿದರೆಂಬುದು ಮಾತ್ರ ನಿಗೂಢವೇನೂ ಅಲ್ಲ.. ಅದರ ಹಿಂದೆ ಒಂದು ಅನುಭವವೂ ಇದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದ ಮಾರ್ಷಲ್ ಗಳನ್ನು ಕಸದ ನಿರ್ವಹಣೆ ನಿಯಂತ್ರಣಕ್ಕೆ ಬಳಸಿಕೊಳ್ಳಲಾಯ್ತು.. ಈ ವೇಳೆ ಕಸ ಎಸೆದವರಿಗೆ ಎಷ್ಟು ಬೇಕೋ ಅಷ್ಟು…
-

ರಾಜರು ಸುಸ್ತು.. ಶ್ರೀರಾಮುಲು ಮೇಲ್ಪಂಕ್ತಿ
ಕೊರೊನಾ ಜೊತೆಗೇ ಬದುಕಬೇಕು ಎಂಬ ಒನ್ ಲೈನ್ ಅಜೆಂಡಾ ಪರಿಸ್ಥಿತಿಯನ್ನು ಸಹಜತೆ ತಂದಿತು ಎಂದು ಎಂದು ಭಾವಿಸಿದವರೇ ಹೆಚ್ಚು. ಲಾಕ್ ಡೌನ್ ನಂತರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇ ಆದಲಿ ಯಾರಿಗೂ ಇಂತಹ ಸ್ಥಿತಿ ಬರುತ್ತಲೇ ಇರಲಿಲ್ಲ.. ಆದರೆ ಎಲ್ಲವನ್ನು ಮೀರಿದ ಪರಿಣಾಮವೇ ಈಗ ರಾಜನಿಗೂ ತಗುಲಿದೆ ಈ ಮಾರಕ ವೈರಸ್. ಸಾಮಾನ್ಯ ಪ್ರಜೆಗಳು ಈ ಆಷಾಢದ ಗಾಳಿ ಯಲ್ಲಿ ಬಂದೆರಗುವ ಸಣ್ಣ ಪುಟ್ಟ ಜ್ವರವನ್ನು ಕೋವಿಡ್ ಲೆಕ್ಕಕ್ಕೆ ಸೇರಿಸಿದ್ದರಿಂದ ಎಲ್ಲವೂ ಅಯೋಮಯ. ಮೆಡಿಕಲ್ ಶಾಪ್ ನಲ್ಲಿ ಆಂಟಿ…
-

ಪ್ರತಿಷ್ಠೆಯ ಬದುಕು ಮನೆಗಳು ಖಾಲಿ ಖಾಲಿ
ಉದ್ಯಾನನಗರಿ, ಹವಾ ನಿಯಂತ್ರಿತ ನಗರ ಎಂದೆಲ್ಲಾ ಕರೆಸಿಕೊಂಡು ಪ್ರಶಾಂತವಾಗಿದ್ದ ಬೆಂಗಳೂರು ಮಧ್ಯಮ ವರ್ಗ ಮತ್ತು ಬಡವರಿಗೆ ಶಾಪವಾಗಿದ್ದು 2003ರ ಆಚೆಗೆ.. ಆಗ ಮುಖ್ಯಮಂತ್ರಿ ಯಾಗಿದ್ದ ಎಸ್. ಎಂ.ಕೃಷ್ಣ ಅವರು ಐಟಿ ಬಿಟಿಗೆ ಕೊಟ್ಟ ಉತ್ತೇಜನ ಮತ್ತು ಅದರ ಉದ್ಯೋಗಿಗಳಿಗೆ ದೊರೆಯುತ್ತಿದ್ದ ಯರ್ರಬಿರ್ರಿ ಸಂಬಳ ಬೆಂಗಳೂರು ದುಬಾರಿ ನಗರವಾಗಿ ರೂಪುಗೊಳ್ಳಲು ಕಾರಣವಾಯ್ತು.. ಪರಭಾಷಿಕರು ಮನೆ ಮಾಲೀಕರು ಕೇಳಿದಷ್ಟು ಹಣ ನೀಡುತ್ತಾ ಒಂದೊಂದು ಏರಿಯಾಗೆ ಈ ಮಟ್ಟದ ಬಾಡಿಗೆ ಎಂದು ನಿಗದಿಯಾಗಿ ಮಾಲೀಕರು ಸಮೃದ್ಧಿ ಪಡೆಯತೊಡಗಿದರು. ಅವರಿಗೆ ಹಣ ಕೈ…
-

ಗುಡ್ ಟೈಮ್ ಬ್ಯಾಡ್ ಟೈಮ್ ಬಗ್ಗೆ ಲಂಕೇಶರ ಬರಹ ಇಂದಿಗೂ ವಾಸ್ತವ
ಆತ ಅವತ್ತು ನಿಜಕ್ಕೂ ಒಬ್ಬಂಟಿಯಾಗಿದ್ದ. ಟೈಮ್ಸ್ ವೃತ್ತದಿಂದ ಕಾಲ್ನಡಿಗೆಯಲ್ಲಿ ಹೊರಟ ಆತನ ಒಬ್ಬಂಟಿತನ ಕೇವಲ ದೇಹದ ಏಕಾಂಗಿತನವಾಗಿರಲಿಲ್ಲ; ಬೇರು ವರಸೆ ಕಿತ್ತ ಗಿಡಕ್ಕಿರಬಹುದಾದ ನೋವು, ಚರ್ಮಸುಲಿದು ನಿಲ್ಲಿಸಿದ ಆಕಳಿಗಿರಬಹುದಾದ ಯಾತನೆ ಅವನ ತಬ್ಬಲಿತನದಲ್ಲಿತ್ತು. ಹದಿನೈದು ವರ್ಷದಿಂದ ಆತನ ಸೇವೆ ಪಡೆದ ಸಮಾಜ ಅವನ ಸುತ್ತಲೂ ಇತ್ತು. ನಿತ್ಯದಂತೆ ಪತ್ರಿಕೆ ಓದುವ, ಸಿನಿಮಾ ನೋಡುವ, ತಮ್ಮ ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ತೊಡಗಿದ ಜನರು ಸುತ್ತ ಸಾಗುತ್ತಿದ್ದರು; ಆದರೆ ಅವರಲ್ಲಿ ಯಾರೂ ಆತನ ಆಳದ ನೋವನ್ನು, ತಬ್ಬಲಿತನವನ್ನು ತಿಳಿಯುವುದು…
Latest News

Stay Connected
Categories
Uncategorized ಕ್ರೈಮ್-ನ್ಯೂಸ್ ಚಿತ್ರ ವಿಮರ್ಶೆ ರಾಜಕೀಯ-ವಿಶ್ಲೇಷಣೆ ವಿದ್ಯಮಾನ ಸಿನಿಮಾ-ಗಾಸಿಪ್ ಸಿನಿ ಹನಿ
Tags
About our Editor

SNEHAPRIYA NAGARAJ
Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

Search the Archives
Access over the years of investigative journalism and breaking reports
You May Have Missed












